Press Day Celebration.KUWJ BIDAR - EYLAAPH E MEDIA

EYLAAPH E MEDIA

EYLAAPH EMEDIA PVT LTD. IS DELIVERING COMMON NEWS TO THE WORLD THROUGH IT'S REPORTERS , NEWS WHICH CONTAINS REALITY. TRUTH WHICH OTHERS NEVER COVER, PLEASE SHARE OUR CHANNEL AND MAKE IT SUBSCRIBED IN YOUR MOBILE TO GET UPDATED ON EVERY NEWS FROM EYLAAPH NEWS.

Eylaaph Breaking update

Post Top Ad

Post Top Ad

Weather

Translate

Saturday, August 22, 2020

Press Day Celebration.KUWJ BIDAR

22 August 2020 Bidar Karnataka

ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ
ಮಾಧ್ಯಮ ಕ್ಷೇತ್ರ ಅಗತ್ಯ 
ಡಿ.ಎಲ್.ನಾಗೇಶ


ಆರೋಗ್ಯಕರರೋಗ್ಯಕರರೋಗ್ಯಕರ ಪ್ರಜಾಪ್ರಭುತ್ವಕ್ಕೆ ಮಾಧ್ಯಮ  
ರಂಗ ಅಗತ್ಯವಾಗಿದ್ದು ಸಮಾಜದ ಪರಿಶುದ್ದತೆಗೆ ಪತ್ರಿಕಾ ರಂಗ
ಮಹತ್ವದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ
ತಿಳಿಸಿದರು.
ನಗರದ ಎಸ್.ಆರ್.ಎಸ್. ಫಂಕ್ಷನ್ ಹಾಲ್‍ನಲ್ಲಿ ಶುಕ್ರವಾರ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ
ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ
ಸಹಯೋಗದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದರು.
ದೇಶದ ಆಡಳಿತದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ
ನ್ಯಾಯಾಂಗದ ಜೊತೆಗೆ ಪತ್ರಿಕಾ ರಂಗವು ತನ್ನದ ಆದೆ
ಮಹೋನತ್ತ ಸ್ಥಾನ ಹೊಂದಿದ್ದು ಸರ್ಕಾರ ಹಾಗೂ ಸಮಾಜದ
ನಡುವೆ ಸೇತುವೆ ನಿರ್ಮಿಸುವ, ಸಾಮಾನ್ಯ ಜನರ ಧ್ವನಿಯನ್ನು
ಆಡಳಿತ ಹಾಗೂ ಜನಪ್ರತಿನಿಧಿಗಳ ಕಿವಿಗೆ ತಲುಪಿಸುವ ಸಂದೇಶ
ವಾಹಕ ಕಾರ್ಯ ಪತ್ರಿಕಾರಂಗ ಮಾಡುತ್ತದೆ ಎಂದರು.
ಕೋವಿಡ್-19 ಈ ಸಂದಿಗ್ದ ಸ್ಥಿತಿಯಲ್ಲಿ ವೈದ್ಯರು, ಪೊಲೀಸರ
ಜೊತೆಗೆ ಪತ್ರಕರ್ತರು ಕೋವಿಡ್ ವಾರಿರ್ಯಸ್‍ಗಳಾಗಿ ತಮ್ಮ
ಪ್ರಾಣದ ಹಂಗು ತೊರೆದು ಹೋರಾಡುತ್ತಾ, ಈಗಾಗಲೆ ಅನೇಕ ಜನ
ಈ ಮಹಾಮಾರಿಗೆ ಬಲಿಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ.
ಕೋವಿಡ್-19 ರ ವಿದಾಯಕ್ಕೆ ಪತ್ರಕರ್ತರು ಸರ್ಕಾರದ ಜೊತೆ
ಕೈಜೋಡಿಸಿ, ತಮ್ಮ ಕೌಟಿಂಬಿಕ ಭದ್ರತೆಯೊಂದಿಗೆ ಸರ್ಕಾರದ
ನಿಯಮಗಳನ್ನು ಜನ ಸಾಮಾನ್ಯರಿಗೆ ಪರಿಣಾಮಕಾರಿಯಾಗಿ
ತಲುಪಿಸುವ ಜವಾಬ್ದಾರಿ ಮುಂದುವರೆಸಲು ಕರೆ ಕೊಟ್ಟರು......
ಸಾನ್ನಿಧ್ಯ ವಹಿಸಿದ ಪ್ರಜಾಪೀತಾ ಬ್ರಹ್ಮಾಕುಮಾರಿ ಈಶ್ವರ್ರಿಯ
ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ
ಬಿ.ಕೆ ಪ್ರತಿಮಾ ಬಹೆನಜಿ ಮಾತನಾಡಿ, ಸಕಾರತ್ಮಕ ಪತ್ರಿಕೆಯಿಂದ
ಶಸಕ್ತ ಭಾರತ ನಿರ್ಮಾಣ ಸಾಧ್ಯವಿದೆ. ಪತ್ರಕರ್ತರ ಕಾರ್ಯ
ಪರಮಾತ್ಮನ ಕಾರ್ಯಕ್ಕೆ ಸಮಾನವಾಗಿದ್ದು ತಮ್ಮ ವೃತ್ತಿಯಲ್ಲಿ
ಅಧ್ಯಾತ್ಮ ಹಾಗೂ ರಾಜಯೋಗ ತತ್ವದ ತಳಹದಿಯಲ್ಲಿ ಕಾರ್ಯ
ಮುಂದುವರೆಸಿದರೆ ಸಶಕ್ತ ಪತ್ರಕರ್ತರಾಗಲು ಸಾಧ್ಯವಿದೆ.
ಕೋರೋನ ಮಾಹಮಾರಿ ಸಂದೇಶ ಸಮಾಜದ ಎಲ್ಲಾ ಸ್ಕರಗಳಿಗೆ
ಬಿತ್ತರಿಸುವ ಮೂಲಕ ಅದಕ್ಕೆ ಅಂತ್ಯ ಹಾಡಲು ಮುಂದೆ
ಬರಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಪರ ಜಿಲ್ಲಾಧಿಕಾರಿ ರುದ್ರೇಶ
ಘಾಳಿ ಮಾತನಾಡಿ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ
ಶುದ್ದೀಕರಣಕ್ಕೆ ಪತ್ರಕರ್ತರ ಸೇವೆ ಅಗತ್ಯವಾಗಿದೆ. ದೇಶದ
ಸ್ವಾತಂತ್ರ್ಯ ಪಡೆಯಲು ಹಾಗೂ ಉಳಿಯಲು ಪತ್ರಕರ್ತರ
ತ್ಯಾಗ ಬಹಳಷ್ಠಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜಿ
ಮಾತನಾಡಿ, ಪತ್ರಕರ್ತರಿಗೆ ಆಯುಷ್ಮಾನ ಭಾರತ ಅಡಿಯಲ್ಲಿ
ಸುಮಾರು 5 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ, ಪ್ರಯಾಣದ ಉಚಿತ
ಬಸ್ ಪಾಸ್ , ನಿವೇಶನ , ನಿವೃತ್ತಿ ವೇತನ ಸೇರಿದಂತೆ ಇತರೆ
ಸೌಕರ್ಯಗಳು ಮಾಧ್ಯಮ ಪಟ್ಟಿಯಲ್ಲಿರುವ ಹಾಗೂ
ಮಾಧ್ಯಮ ಪಟ್ಟಿಯಲ್ಲಿ ಇರದ ಪತ್ರಕರ್ತರಿಗೂ ಸಿಗಲಿದೆ ಎಂದು
ವಿವರಿಸಿದರು. ಜಿಲ್ಲೆಯ ಹಿರಿಯ ಪತ್ರಕರ್ತ ಗಂಧರ್ವ ಸೇನಾ
ಮಾತನಾಡಿದರು. ಕ.ಕಾ.ಪ.ಸಂಘದ ರಾಜ್ಯ ಪ್ರತಿನಿಧಿ ಬಸವರಾಜ
ಕಾಮಶೆಟ್ಟಿ ಹಾಗೂ ಪತ್ರಕರ್ತ ಡಿ.ಕೆ ಗಣಪತಿ ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಕೋವಿಡ್-19 ರ ಈ ಸಂದಿಗ್ದ ಸ್ಥಿತಿಯಲ್ಲೂ
ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ
ಪತ್ರಕರ್ತರಾದ ಶಶಿಕಾಂತ ದಿಕ್ಷೀತ್, ವೆಂಕಟೇಶ ಮೋರ್ಖಂಡಿ,
ಅಬ್ದುಲ್ ಅಲಿ, ಸುರೇಶ ನಾಯಕ್, ವಿಜಯಕುಮಾರ ಸೂರ್ಯಾನ್,
ದೇವಿದಾಸ ಚಿಲ್ಲರ್ಗಿ, ಎಂ.ಡಿ. ಅಲಿಮುದ್ದಿನ್, ಶಿವಕುಮಾರ ವಣಗೇರಿ, ಜಗದೇವಿ ,
ಚಂದ್ರಯ್ಯ ಸ್ವಾಮಿ, ಸೂರ್ಯಕಾಂತರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಇತ್ತಿಚಿಗೆ ಕೋವಿಡ್ -19ಕ್ಕೆ ತುತ್ತಾಗಿ ಪ್ರಾಣ........ಕಳೆದುಕೊಂಡ ಪತ್ರಕರ್ತ ದಿ.ಪ್ರಭುಶೆಟ್ಟಿ ಸೈನಿಕಾರ ಅವರ
ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
ಆರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ
ಧರಂಪುರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ
ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಕಾರ್ಯಕ್ರಮ ನಿರೂಪಿಸಿ, ವಾರ್ತಾ
ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ
ಗವಿಸಿದ್ದಪ್ಪ ಹೊಸಮನಿ ವಂದಿಸಿದರು.
ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ಚೌದ್ರಿ, ದೀಪಕ ಮನ್ನಳ್ಳಿ, ಪ್ರಥ್ವಿರಾಜ್ .ಎಸ್.
ಸುನೀಲ ಕುಲಕರ್ಣಿ, ಯಾದುಲ್ಲಾ ಹುಸೇನಿ, ಶರಣಪ್ಪ ಚಿಟ್ಮೆ, ಶಿವಶರಣಪ್ಪ ಹುಗಾರ,
ಸುಧಾಕರ ಸೂರ್ಯವಂಶಿ ಸೇರಿದಂತೆ ಸಂಘದ ವಿವಿಧ ತಾಲೂಕಾಗಳಿಂದ ಆಗಮಿಸಿದ
ಪದಾಧಿಕಾರಿಗಳು ,ಸದಸ್ಯರು ಸ್ಥಳೀಯ ಪತ್ರಕರ್ತರು ಕಾರ್ಯಕ್ರಮದಲ್ಲಿ
ಭಾಗವಹಿಸಿದರು.....


No comments:

Post Top Ad