ಜಮಾಅತೆ ಇಸ್ಲಾಮೀ ಹಿಂದ್, ಬೀದರ.
ಬೀದರ ಅಕ್ಟೋಬರ್,30
ಇಡೀ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಪ್ರವಾದಿ
ಮುಹಮ್ಮದ್ ಜನಿಸಿದ ಈ ಪವಿತ್ರ ತಿಂಗಳಿನ ಇಂದು
ಮಾನವರ ಕಲ್ಯಾಣ ಹಾಗೂ ಸೇವೆ ನೀಡುವ
ಸದುದ್ದೇಶದಿಂದ ಜಮಾಅತೆ ಇಸ್ಲಾಮೀ ಹಿಂದ್, ಬೀದರ.
ವತಿಯಿಂದ ಆಂಬುಲೆನ್ಸ್ ಸೇವೆಯ ಉದ್ಘಾಟನೆ ಬೀದರನ ಐತಿಹಾಸಿಕ
ಜಾಮಾ ಮಸೀದಿಯಲ್ಲಿ ನೆರವೇರಿಸಲಾಯಿತು. .ಜಮಾಅತೆ
ಇಸ್ಲಾಮೀ ಹಿಂದ್ನ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಜ:
ಮುಹಮ್ಮದ್ ಯೂಸುಫ್ ಕನ್ನಿಯವರು “ಅಲ್ಲಾಹನು
ಮಹಾನನು’, ಅಲ್ಲಾಹನ ಹೆಸರಿನಿಂದ” ಎಂದು ಉಚ್ಛರಿಸುತ್ತಾ,
ಆಂಬುಲೆನ್ಸ್ ವಾಹನ ಮುಂದೆ ಚಲಿಸುವುದರ ಮೂಲಕ
ಅದರ ಉದ್ಘಾಟನೆ ನೆರವೇರಿಸಿದರು, ಅವರು ಮಾತನಾಡುತ್ತಾ,
ಬೀದರನ ರೋಗಿಗಳಿಗೆ ತುರ್ತಾಗಿ ಸಾಗಿಸಲು ಎಲ್ಲಾ ಬಡ
ರೋಗಿಗಳಿಗೆ ಪುಕ್ಕಟ್ಟೆ ಸೇವೆ ನೀಡಲು ಆಂಬುಲೆನ್ಸ್ ಸೇವೆ
ಪ್ರಾರಂಭಿಸಿರುವುದು ಸಂತೋಷದ ವಿಷಯ. ಅಲ್ಲಾಹನು
ಈ ಸೇವೆಯನ್ನು ಸ್ವೀಕರಿಸಲಿ ಎಂದು ಪ್ರಾರ್ಥಿಸಿದರು. ಆಂಬುಲೆನ್ಸ್
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜ: ರಹೀಂ
ಖಾನ್ ಶಾಸಕರು ಬೀದರ ಹಾಗೂ ಶ್ರೀ ಬಸವೇಶ್ವರ್ ಹೀರಾ
ಡಿ.ವಾಯ್.ಎಸ್.ಪಿ. ಉಪಸ್ತಿತರಿದ್ದು ತಮ್ಮ ಸಂದೇಶ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್
ಕಲಬುರರ್ಗಿ ಪ್ರಾಂತದ ಸಂಚಾಲಕರಾದ ಜ: ಝಾಕೀರ್
ಹುಸೇನ್, ಅಧ್ಯಕ್ಷರಾದ ಜ: ಮುಹಮ್ಮದ್ ನಿಜಾಮುದ್ದೀನ್,
ಮುಹಮ್ಮದ್ ಆಸಿಫುದ್ದೀನ್, ಮುಹಮ್ಮದ್ ತಾಹಾಕಲಿಮುಲ್ಲಾ,
ಮುಹಮ್ಮದ್ ಆರಿಫುದ್ದೀನ್, ಮುಜ್ತಬಾ ಖಾನ್,
ಮುಹಮ್ಮದ್ ಮೌಅಝಮ್, ಮುಹಮ್ಮದ್ ಶೊಬುದ್ದೀನ್,,,,ರಫೀಕ್ ಅಹ್ಮದ, ಝಫರುಲ್ಲಾ ಖಾನ್ ಹಾಗೂ
ಇತರರು ಹಾಜರಿದ್ದರು.



No comments:
Post a Comment