ಸದರಿ ಕಚೇರಿಯ ನಿರ್ಮಾಣ ಕಾರ್ಯವನ್ನು ಕೇಂದ್ರ ಸರ್ಕಾರದ ಆರ್ಐಡಿಎಫ್ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಕೈಗೊಳ್ಳಲಾಗಿದ್ದು, ನಿರ್ಮಾಣ ಕಾರ್ಯವನ್ನು ನ್ಯಾಷನಲ್ ಪ್ರೊಜೆಕ್ಟ್ ಕನಸ್ಟçಕನ್ ಕಾರ್ಪೋರೇಷನ್ ಬೆಂಗಳೂರು ಇವರಿಗೆ ವಹಿಸಲಾಗಿದೆ ಎಂದು ಇದೆ ವೇಳೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಮಲ್ಲಿಕಾರ್ಜುನ ಹಂಚನಾಳ ಅವರು ಶಾಸಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ರವೀಂದ್ರಕುಮಾರ ಭೂರೆ, ಆಡಳಿತ ಸಹಾಯಕ ನಿರ್ದೇಶಕರಾದ ಡಾ.ಗೌತಮ್ ಅರಳಿ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ.ಯೋಗೇಂದ್ರ ಕುಲಕರ್ಣಿ, ಪಾಲಿಕ್ಲಿನಿಕ್ನ ತಜ್ಞ ಪಶುವೈದ್ಯರಾದ ಡಾ.ಬಸವರಾಜ ನಿಟ್ಟೂರೆ, ಸಹಾಯಕ ಆಡಳಿತ ಅಧಿಕಾರಿಗಳಾದ ಸಿದ್ದಪ್ಪ ಪಾಟೀಲ್, ಎನ್ಪಿಸಿಸಿ ಅಭಿಯಂತರರಾದ ಬಿ.ಎಸ್. ಪಾಟೀಲ್ ಹಾಗೂ ಇಲಾಖೆಯ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.



No comments:
Post a Comment