ಜಿಲ್ಲಾ ಕಾನೂನು ಸೇವೆಗಳ
ಪ್ರಾಧಿಕಾರದಿಂದ ಜನಜಾಗೃತಿ
ಕಾರ್ಯಕ್ರಮ...
ಬೀದರ ಅಕ್ಟೋಬರ್ 19 (ಕರ್ನಾಟಕ ವಾರ್ತೆ) ಕರ್ನಾಟಕ ರಾಜ್ಯ
ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ
ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ.
ಮತ್ತು ಜಿಲ್ಲಾ ವಕೀಲರ ಸಂಘ ಬೀದರ ಇವರ
ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಕೋವಿಡ್-19 ನಿರ್ಮೂಲನೆ
ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು
ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ
ಶ್ರೀಕಾಡಲೂರ ಸತ್ಯನಾರಾಯಣಾಚಾರ್ಯ ಅವರು ಜಿಲ್ಲಾ
ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಪೂರ್ವದಲ್ಲಿ ಜನ ಆಂದೋಲನ ಕೋವಿಡ್-19ರ
ಕುರಿತು ಹಾಜರಿದ್ದ ಎಲ್ಲ ನ್ಯಾಯಾಲಯದ ಅಧಿಕಾರಿ, ಸಿಬ್ಬಂದಿಗಳಿಗೆ ಹಾಗೂ
ಅರೇಕಾಲಿಕ ಸ್ವಯಂ ಸೇವಕರು ಹಾಗೂ ವಕೀಲರುಗಳಿಗೆ
ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್.,
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ರಾಮ ಟಿ.ಪಿ., ಜಿಲ್ಲಾ
ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ ಜಗತಾಪ ಮತ್ತು
ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ
ವರ್ಗವರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ
ಸಿಬ್ಬಂದಿ ಶ್ರೀ ಶಂಕ್ರಪ್ಪ ಜನಕಟ್ಟಿ, ಅನೀಲ್ ಮೇತ್ರೆ ಮತ್ತು
ಇತರರು ಹಾಜರಿದ್ದರು.....
ಜನಸಂದಣಿ ಪ್ರದೇಶದಲ್ಲಿ ಜಾಥಾ: ಈ ಜನ ಆಂದೋಲನ ಜಾಗೃತಿ
ಜಾಥಾವು ನಗರದ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿತು. ಈ
ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಡಿ
ಆಯ್ಕೆಯಾದ ಪ್ಯಾನಲ್ ವಕೀಲರು, ಅರೇಕಾಲಿಕ ಸ್ವಯಂ
ಸೇವಕರು ಕೊವಿಡ್-19ರ ಕುರಿತು ಜನಸಾಮಾನ್ಯರಲ್ಲಿ ಅರಿವು
ಮೂಡಿಸಿದರು. ಮಾಸ್ಕ ಧರಿಸಿ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿ,
ಮಾಸ್ಕ ವಿತರಣೆ ಮಾಡಿದರು...

No comments:
Post a Comment